ಸಿಡ್ನಿಯಲ್ಲಿ ಹುಲ್ಲು
ತರಿದು ಹಾಸಿದ ಕಾಂಕ್ರೀಟ್ ಅಂಗಳವನ್ನು
ಮುಚ್ಚಿಕೊಳ್ಳುವ ದರಲೆ ಗುಡಿಸುವಾಗ
ಮೂಲೆಯಲ್ಲಿ
ಕೊತ್ತಂಬರಿ ಸೊಪ್ಪಿನ ಕಂತೆ ಹಿಡಿದು
ಶಿಕಾಗೋದ ಏ.ಕೆ.ರಾಮಾನುಜಂ
“ಹಚ್ಚಗೆ” ನಗುತ್ತಾರಲ್ಲ!
Archive for November 2007
ಜಗದಗಲ
In ನೀಲುಗಳು, ಪದ್ಯ on November 30, 2007 at 5:34 amಕನಸಿನ ಹಗಲು ಕಾಟ
In ಅಂದಂದು, ಯೋಚನೆ on November 24, 2007 at 4:56 pmಇರುಳು ನಿದ್ದೆಯಲ್ಲಿ ಬರಬೇಕಾದ ಕನಸು, ಹಗಲೆಲ್ಲಾ ಜತೆಯಲ್ಲೇ ಓಡಾಡಿಕೊಂಡಿದ್ದರೆ ತುಂಬಾ ಕಷ್ಟ. ಕೆಲವು ಕಡೆಗಳಿಗೆ ಅದನ್ನು ಕರಕೊಂಡು ಹೋಗಲು ನನಗೆ ಇಷ್ಟವಿಲ್ಲ. ಅದು ಕನಸಿಗೆ ಗೊತ್ತಾಗುವುದಿಲ್ಲ. ಹೇಳಿದರೆ ಕೇಳಲು ಅದಕ್ಕೆ ಕಿವಿಯಾಗಲೀ ಮತ್ತೊಂದಾಗಲೀ ಇಲ್ಲ. Read the rest of this entry »
ಸೇವೆ
In ನೀಲುಗಳು, ಪದ್ಯ on November 21, 2007 at 5:51 am
ಆಗಸಕ್ಕೇ ಪರದೆ ಹಿಡಿಯಲು ಹೊರಟ
ಮರ
ನಾಕು ಜನಕ್ಕೆ ಸೊಂಪಾದ
ನೆರಳಂತೂ ಆಗಿಯೇ ಆಯಿತು.
ಬಾಣಲೆ ಬೆಂಕಿ
In ಅಂದಂದು, ಯೋಚನೆ on November 17, 2007 at 10:28 amಕರ್ನಾಟಕದ “ವಚನಭ್ರಷ್ಟತೆ”, “ಮಾನ-ಅವಮಾನ”, “ಗೌರವ-ಅಗೌರವ” ಗಳ ಹುಡುಗಾಟದ ಅಭದ್ರತೆಯಿಂದ ನಾನು ನೇರ ಬಂದಿಳಿದದ್ದು ಆಸ್ಟ್ರೇಲಿಯಾದ ಚುನಾವಣಾ ಪ್ರಚಾರದ ಕೂಗಾಟ, ಹಾರಾಟದ ನಡುವಿಗೆ.
Read the rest of this entry »
ತಲುಪಿದೆನೆ?
In ಅಂದಂದು, ಯೋಚನೆ on November 14, 2007 at 12:28 pmಸಿಡ್ನಿಗೆ ಬಂದ ಮರುದಿನವೇ ಕೆಲಸದಲ್ಲಿ ತೊಡಗಿಕೊಂಡೆ. ಒಂದು ವಾರ ನೋಡ ನೋಡುತ್ತಲೇ ಜಾರಿ ಹೋಗಿತ್ತು. ಆದರೂ ಸಿಡ್ನಿ ತಲುಪಿದ್ದೇನೆ ಅನಿಸುತ್ತಿಲ್ಲ. ಇನ್ನೂ ಬೆಂಗಳೂರಿನಲ್ಲಿರುವಂತೇ.
ಟೀಕೆ
In ನೀಲುಗಳು, ಪದ್ಯ on November 7, 2007 at 9:46 pmದಟ್ಟತೆ ತೆಳುವಾಗೋದನ್ನು ಸಹಿಸಲಾಗದೆ
ಹರೆಯದಲ್ಲೇ ನೇಣು ಹಾಕ್ಕೊಂಡು ಜೀವ ಬಿಟ್ಟ
ಗೆಳತಿ
ಮೊನ್ನೆ ನಲ್ಲನ ಮಾತಿಗೆ ನಾನು ಕುಲುಕುಲಿಸುವಾಗ
ನೋಡುತ್ತಾ ನಿಂತಿದ್ದಳು ಮರೆತುಬಿಟ್ಟೆಯ ಅನ್ನುವಂತೆ.
ಬೆಂಗಳೂರಿಗೆ ವಿದಾಯ
In ಅಂದಂದು, ಯೋಚನೆ on November 4, 2007 at 9:06 am೩/೧೧/೦೭ ರಾತ್ರಿ ೧೦ ಗಂಟೆ.
ಬೆಂಗಳೂರು ಏರ್ಪೋರ್ಟಿನ ವಿಧಿ ವಿಧಾನಗಳನ್ನೆಲ್ಲಾ ಮುಗಿಸಿ ಕೂತು ನಿಟ್ಟುಸಿರುಬಿಡುತ್ತೇನೆ. ಬರುತ್ತಿದ್ದಂತೆಯೇ ಹೊರಟೂ ಬಿಡುತ್ತಿದ್ದೇನೆ. ಬೆಂಗಳೂರನ್ನು ಬಿಡುತ್ತೇನೆ.