
ಪುಟ್ಟ ಹುಡುಗಿ
ಈಡ ಕೈಗೂಸಾಗಿರುವಾಲೇ
ಮಣಿಗಂಟು ಮುರಕೊಂಡಿರಬೇಕು
ಬಾಯಾರಿ ನೀರಿಗೆಂದು
ಆ ಕೊಳಕ್ಕಿಳಿದು ಜಾರಿ ಬಿದ್ದಿರಬೇಕು
Read the rest of this entry »
Archive for the ‘ಪದ್ಯ’ Category
ಈಡ: ಹುಡುಗಿ ಕತೆ
In ಪದ್ಯ, ವಿಜ್ಞಾನ, ಸೈನ್ಸ್ ಪದ್ಯ on September 4, 2009 at 8:40 pmಕನ್ನಡದಲ್ಲಿ ಹೊಸ ಕಾವ್ಯ ಪ್ರಯೋಗ
In ಅನುವಾದ, ಪದ್ಯ on August 30, 2009 at 5:55 pm
ಕೆಂಡಸಂಪಿಗೆಯಲ್ಲಿ ನಡೆದಿರುವ ಪ್ರಯೋಗವೊಂದು ಕನ್ನಡ ಕಾವ್ಯಕ್ಕೆ ಹೊಸದು. ಈ ಹಿಂದೆ ಟಿ.ಎಸ್.ಎಲಿಯಟ್ನ ಪದ್ಯವೊಂದರ ಕುರಿತೂ ಇದೇ ಬಗೆಯ ಪ್ರಯೋಗ ನಡೆದಿತ್ತು.
ಮಿಡತೆ ಸಂತೆ ಕತೆ
In ಪದ್ಯ, ವಿಜ್ಞಾನ, ಸೈನ್ಸ್ ಪದ್ಯ on May 19, 2009 at 7:28 pm
ಬೈರಾಗಿಯಾಗಿ
ಅಂಡಲೆಯೋ ಮಿಡತೆ ಕಾಲನ್ನ
ಅಪ್ಪಿತಪ್ಪಿ ಸವರಿಬಿಟ್ಟರಾಯ್ತು
ಅಮಲೇರ್ಸೋ ಸೆರಟೊನನ್ ತಲೇಲಿ ದ್ರವಸಿ
ಜಗ್ಗನೆ ಲೋಕದಾಸೆ ಹೊತ್ತಿ
ಹುಡಕ್ಕೊಂಡು ಹೋಗಿ ಮಿಡತೆ
ಹಿಂಡು ಸೇರ್ಕೊಂಡ್ಕೂಡಲೆ ಕೊಳ್ಳೆಬುದ್ಧಿ ವಿರಾಜಮಾನ.
Read the rest of this entry »
ಸ್ನೇಲ್ಪುರಾಣ
In ಚಿತ್ರಗಳು, ಪದ್ಯ, ಸೈನ್ಸ್ ಪದ್ಯ on April 24, 2009 at 3:46 pm
ಬಸವನ ಹುಳ
ಕ್ಕೆ
ಸ್ನೇಲ್ ಪೇಸು
ಎಂಜಲು ಮೈ
ಚಿಪ್ಪಲ್ಲಿ ಸುತ್ತಕೊಂಡು
ಮಳೆ ಬಂತೋ ಹೊರಗೆ ಸುರಕೊಂಡು
ಮೂಸಿ ಮೂಸಿ
ಮುಂದಿನ ಮಳೆವರೆಗೂ ಬೇಕಾಗೋಷ್ಟು
ಎಲೆನೂ ಮಣ್ಣಿನ ವಾಸನೇನೂ
ಒಳಗೆ ತುಂಬ್ಕೊಂಡು ಒಳಗೆ ಹೋದರೆ
ಚಳೀಲಾಗಲಿ, ಬೇಸಿಗೆಲಾಗಲೀ Read the rest of this entry »
ಮನದಾಟ
In ಪದ್ಯ on April 22, 2009 at 6:19 pm
ಸು-
ಸಂಸ್ಕೃತ ವ್ಯಾಕರಣದ ಮೇಷ್ಟ್ರು ‘ಮನಸ್ಸು’ ನಪುಂಸಕ
ವೆಂದ ಹಳೆಯ ಪಾಠದ ನೆನಪು ಮರುಕಳಿಸಿದ್ದೇ ಹುಂಬನಂತೆ
ಎಗ್ಗಿಲ್ಲದೆ ಅಲೆದಾಡಲು ಬಿಟ್ಟುಕೊಂಡೆ ಅವಳನ್ನು
ನನ್ನ ಮನದ
ಗೋಮೂತ್ರಮಹಿಮೆ [Banned on ಸಂಪದ]
In ಅಂದಂದು, ಪದ್ಯ, ಯೋಚನೆ on March 27, 2009 at 12:59 pmಭಕ್ತಿ ತುಳುಕಾಡಿ
ಭಗವದ್ಗೀತೆಯ ನ್ಯೂ
ಎಡಿಷನ್-ಹಾರ್ಡ್ ಬೌಂಡ್ ಕಾಪಿಯನ್ನು
Read the rest of this entry »
ಹೀಗೆ ಕವಿಕೆಲಸ ಚರ್ಚಿಸಬಹುದಲ್ಲ
In ಅನುವಾದ, ಪದ್ಯ, ಯೋಚನೆ on February 8, 2009 at 2:31 pmನಾನು ಕವಿಯಲ್ಲ. ಆಗಾಗ ಪದ್ಯ ಬರೆಯುವ ಪ್ರಯತ್ನ ಮಾಡುತ್ತೇನಾದರೂ ಕೂಡ. ಏಕೆಂದರೆ ಕವಿಯಾಗಲು ಬೇಕಾದ ಕಾವ್ಯದ ವಿಸ್ತೃತ ಓದು, ಶ್ರದ್ಧೆಯ ಕೊರತೆ ನನ್ನಲ್ಲಿ ನನಗೇ ಕಂಡಿದೆ. ಆದರೆ ಅಡಿಗರು ಹೇಳುವಂತೆ ನನ್ನ ಪದ್ಯವನ್ನು ನಾನೇ ವಿಮರ್ಶೆಗೆ ಒಡ್ಡಿಕೊಳ್ಳುವುದು ಅಗತ್ಯ ಎಂದು ಬಗೆಯುತ್ತೇನೆ. ಕೆಲವೊಮ್ಮೆ ಪದ್ಯ ಸೊರಗುವಷ್ಟು ಅದನ್ನು ತಿದ್ದುತ್ತೇನೆ ಕೂಡ.
ಕನಸಿನ ಪ್ರಾಯ ಹಾಗು ಮರೆತದ್ದು
In ನೀಲುಗಳು, ಪದ್ಯ on November 7, 2008 at 5:47 amಕನಸಿನ ಪ್ರಾಯ
“ಯೌವ್ವನದಲ್ಲಿ ಕನಸದವರಿಲ್ಲವಂತೆ
ನಡುವಯಸ್ಸಲ್ಲಿ ಕನಸದವರು ವ್ಯರ್ಥವಂತೆ
Read the rest of this entry »
ಹೊಳಪು, ಅರಸಿದ್ದು
In ನೀಲುಗಳು, ಪದ್ಯ on October 20, 2008 at 5:51 amಹೊಳಪು
ಐವತ್ತು ದಾಟಿದ ಅತ್ಯಂತ ಚೆಲುವೆಯ
ಕಣ್ಣಲ್ಲಿ ಕಂಡಿದ್ದು-
Read the rest of this entry »
ಪರಸ್ಪರ, ಸರ್ವಾಂತರ್ಯಾಮಿ
In ನೀಲುಗಳು, ಪದ್ಯ on September 27, 2008 at 12:32 pmಪರಸ್ಪರ
ಗುಡ್ಡದ ಮೇಲೆ ಹುಡುಕುವ ಪಾರಮಾರ್ಥದವರು
ಕೆಸರಲ್ಲಿ ಕಾಲಿಟ್ಟು ತಡಕುವ ಲೌಕಿಕರ ಕಂಡು
ಮತ್ತು
Read the rest of this entry »
ಏನಕ್ಕಾಗಿ, ನುಂಗಿಕೊಂಡದ್ದು
In ನೀಲುಗಳು, ಪದ್ಯ on August 27, 2008 at 8:55 amಏನಕ್ಕಾಗಿ
ನಲ್ಲ-
ಮುಂಜಾನೆ ಜಗಳವಾಡಿ ಹೋದ ನಿನ್ನ
ದಾರಿ ಕಾಯುವಾಗ ಸಂಜೆ
ಮೆಲ್ಲನೆ ಕತ್ತಲಿಳಿಯುತ್ತಾ
ಕಿಟಕಿಗಾಜಿನ ಮೇಲೆ ಮಳೆಯ ಹನಿ
ಆತುರಪಡದೆ ಸಾವಕಾಶ ಜಾರುತ್ತದೆ.
————————————
ನುಂಗಿಕೊಂಡದ್ದು
ನಗುತ್ತೀನೋ ನಲ್ಲ-
ಹೊಸತರಲ್ಲಿ ಚಳಿಗಾಲದ ಬಿಸಿಲಂತಿದ್ದವನು
ಇತ್ತಿತ್ತ
ರಣಬೇಸಿಗೆಯ ಬಿಸಿಲಾಗಿ
ಒಣಗಿಸುತ್ತಿದ್ದೀಯ
ಅಂತ ನಿನಗೇ ಗೊತ್ತಿಲ್ಲದೆ
ಉದಾರವಾದಿಯಂತಾಡಿದಾಗ.
ಸೋಜಿಗ
In ನೀಲುಗಳು, ಪದ್ಯ on July 29, 2008 at 7:59 pmಸೋಜಿಗ
ಪ್ರಾಮಾಣಿಕತೆಗೆ
ಬೇಕಾದ ಮನಸ್ಥಿತಿ
ಸಂಸ್ಕೃತಿ ಚರಿತ್ರೆ ದೇಶ ಕಾಲಕ್ಕೆಲ್ಲಾ
Read the rest of this entry »
ಅವನು ಇವನು ನೀಲುಗಳು
In ನೀಲುಗಳು, ಪದ್ಯ on July 17, 2008 at 10:22 amಕೇಳಿದ್ದು ಹೇಳಿದ್ದು
“ಬಾಗಿಲು ತಟ್ಟಿದ ಸದ್ದಾಯಿತು” ಅಂದ ಅವನು.
“ಸದ್ದು ಬಾಗಿಲ ತಟ್ಟಿತು” ಅಂದ ಇವನು.
Read the rest of this entry »
ಜಗನ್ನಾಥನ ತಬ್ಬಲಿ ಮಕ್ಕಳು
In ಅಂದಂದು, ಪದ್ಯ, ಯೋಚನೆ on July 5, 2008 at 11:19 amಜೀವ ದಿಟ ಅನಿಸಲಿಲ್ಲವೇ ನಿನಗೆ?
ದೇವ ಸುಳ್ಳು ಅನಿಸಲಿಲ್ಲವೆ ನಿನಗೆ?
ನಂಬಿಕೆಯೇ ಎಲ್ಲ ಮೀರಿದ ಸತ್ಯ ನಿನಗೆ
ಬುಡವಿಲ್ಲದಿದ್ದರೂ ಅಲ್ಲವೆ?
ಆ ರಥದಲ್ಲಿ ಕೂತ ಗೊಂಬೆಯ
ಒಳಗೇನೋ ಕಂಡಿತೆನ್ನುವ
ಕೋಟಿ ಕೋಟಿ ಜನ ಕುರುಡುರೇ?
ಅನುಮಾನ ಸಹಜ
ಇರಬಹುದು ಎಂದೇಕೆ ಅನಿಸಲಿಲ್ಲ ನಿನಗೆ?
ನಿನ್ನ ಯಾವುದೋ ತಬ್ಬಲಿತನ
ಕಳಕೊಳ್ಳುವ ತವಕದಲ್ಲಿ
ನಿನ್ನ ಮಕ್ಕಳೀಗ ತಬ್ಬಲಿ
ರಥಚಕ್ರಕ್ಕೆ ಸಿಕ್ಕಿ ಸಾಯುವ ಪುಣ್ಯವಿಲ್ಲದಿದ್ದರೆ
ರಥವೆಳೆಯುವ ಕಾಲಿಗೆ ಸಿಕ್ಕಾದರೂ ಸಾಯಬೇಕು
ಮಕ್ಕಳನ್ನು ತಬ್ಬಲಿ ಮಾಡಬೇಕು.
ಅವರು
ತಬ್ಬಲಿಯಾಗಿ ರಥವೆಳೆಯುವ ಕೈಗಳಾಗಬೇಕು
ತುಳಿದು ಕೊಲ್ಲುವ ಕಾಲುಗಳಾಗಬೇಕು
ಅಯ್ಯೋ,
ರಥಚಕ್ರ ಮಾತ್ರ ತಿರುಗುತ್ತಲೇ ಇರಬೇಕು.
ನೀಳ್ಗತೆ
In ನೀಲುಗಳು, ಪದ್ಯ on June 26, 2008 at 9:52 pmಮೆಲ್ಲಗೆ ಜಾರುವ ರೈಲಲ್ಲಿ
ಹಣ್ಣುಹಣ್ಣು ಮುದುಕ ಮುದುಕಿ
ಆಕೆಯ ಸುಕ್ಕುಗಟ್ಟಿದ ಅಂಗೈಯೊಳಗೆ
ಆತನ ಸುಕ್ಕುಗಟ್ಟಿದ ಅಂಗೈ
ದಾರಿಯುದ್ದಕ್ಕೂ ಮಾತುಕತೆ-
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”
ಮುದುಕಿ : “ಕೇಳಿಸ್ತ?”; ಮುದುಕ : “ಅಂ?”
ಅಂಗೈಗಳು
ಒಂದನ್ನೊಂದು ಸವರುತ್ತಲೇ ಇದ್ದವು.
ತಾಯಿಯ ನಾಕನೇ ಮುಖ
In ಪದ್ಯ, ಯೋಚನೆ on June 25, 2008 at 11:43 amಶಂಕರ ಮೊಕಾಶಿ ಪುಣೇಕರರ (ಗಂಗವ್ವ ಗಂಗಾಮಾಯಿ, ಅವಧೇಶ್ವರಿ) ಒಂದು ಪದ್ಯ ಇತ್ತೀಚೆಗೆ ಯಾಕೋ ಮತ್ತೆ ನೆನಪಾಯಿತು. ಹೆಸರು “ಮಾಯಿಯ ಮೂರು ಮುಖಗಳು” ಮತ್ತೊಂದೆರಡು ಬಾರಿ ಓದಿದೆ. ಪದ್ಯ ತಾಯ್ತನದ ಬಗ್ಗೆ. ವಿಶಾಲವಾದ ಅರ್ಥದಲ್ಲಿ ಅದರಲ್ಲಿ ಇಂಡಿಯಾ ಮತ್ತು ಸ್ವಾತಂತ್ಯ್ರದ ಬಗ್ಗೆಯೂ ಇದೆ. ಒಂದು ರೀತಿಯಲ್ಲಿ ಪೊಲಿಟಿಕಲ್ ಪದ್ಯ. ಆದರೆ ಅದರೊಳಗಿನ ಒಂದು ಅಂಶ ಮಾತ್ರ ನನ್ನ ನೆನಪಿನಲ್ಲಿ ಉಳಿದಿದ್ದೇ ಅದನ್ನು ಮತ್ತೆ ಓದಲು ಪ್ರೇರಣೆಯಾಯಿತು.
Read the rest of this entry »
ರಾಮಾವತಾರ ಮತ್ತು ಹುಡುಕಾಟ
In ನೀಲುಗಳು, ಪದ್ಯ on June 19, 2008 at 7:06 pmರಾಮಾವತಾರ
ನನ್ನೊಡನೆ
ಪ್ರೀತಿಯ ಉತ್ಕಟತೆಯಲ್ಲಿ ಮೈಮರೆಯುವಾಗ
Read the rest of this entry »
ಒಂದು ಕೆಟ್ಟ ದಾಸರ ಪದ
In ಪದ್ಯ, ಯೋಚನೆ on June 16, 2008 at 10:01 pmಕೇಳೋ ಸಚ್ಚರಿತ, ಮನುಜಾ
ಧೃಡ ಭಕ್ತಿಯಿಂದಲಿ ಹರಿಯ ನೆನೆದರೆ ಪಡೆವ ಮೋಕ್ಷ ಸಾಕ್ಷಿ || ಮನುಜಾ
ಧೃಡ ಭಕ್ತಿಯಿಲ್ಲದೆ ಹರಿಯ ನೆನೆದರೆ ಪಡುವ ನರಕವೇ ಸಾಕ್ಷಿ || ಮನುಜಾ ಕೇಳೋ ಸಚ್ಚರಿತ
ಎರಡು ಬೆಸ್ತರ ನೀಲುಗಳು
In ನೀಲುಗಳು, ಪದ್ಯ on June 6, 2008 at 10:34 amನಡುನಡುವೆ
ಪಟ್ಣಣದತ್ತ ಕಣ್ಣಿಟ್ಟ ಬೆಸ್ತರ ಹುಡುಗ
“ಮೀನಲ್ಲಿ… ಭವಿಷ್ಯ… ಇಲ್ಲ… ಏನು ಮಾಡೋದು” ಅಂತ
ತಡೆತಡೆದು ಆಡಿದ ಮಾತುಗಳ ನಡುವೆಲ್ಲಾ
Read the rest of this entry »
ವಿಮರ್ಶೆ
In ನೀಲುಗಳು, ಪದ್ಯ on May 22, 2008 at 7:30 amಹಾಲಿವುಡ್ಡಿನ
ಮರಗಳಿಗೇ ಬೇರು
Read the rest of this entry »
ನನ್ನದು
In ನೀಲುಗಳು, ಪದ್ಯ on May 6, 2008 at 10:22 pmಕಿವಿಯೊಳಗೇ ಬಂದು ಹೂತ ಸಂಗೀತ ಕಛೇರಿ
ಕಣ್ಣೆದುರೇ ಬಂದು ಕುಣಿಯೋ ಜಗತ್ತು
Read the rest of this entry »
ಮಿಗಿಲಾದುದು
In ನೀಲುಗಳು, ಪದ್ಯ on April 28, 2008 at 9:57 pmಪ್ರೀತಿಯ ಗಾಢತೆಯಲ್ಲಿ ಸದಾ ಸಿಗುತ್ತಿದ್ದ ನಲ್ಲ
ಈಗೀಗ
ಸಮಯ ಸಿಕ್ಕಾಗ ಸಿಗುತ್ತಾನೆ
ಮಹಿಳೆ
In ನೀಲುಗಳು, ಪದ್ಯ on April 20, 2008 at 7:05 pmಮುಟ್ಟಲಾರದ ಕೆಂಡದ ಕೆಂಪು
ಹೊತ್ತು ಹೊರೆಯುವ ಬಸಿರ ಹಸಿರು
Read the rest of this entry »
ಸರಳವಂತೆ
In ನೀಲುಗಳು, ಪದ್ಯ on April 10, 2008 at 8:10 pmನನ್ನ ನಲ್ಲ ಗಡ್ಡಬಿಟ್ಟಾಗ
ಅವನ ಕೆನ್ನೆಯ ನುಣುಪು ನೆನಪಾಗುತ್ತದೆ
Read the rest of this entry »
ಮೈದಾಸ
In ನೀಲುಗಳು, ಪದ್ಯ on April 6, 2008 at 5:24 pmಕಬ್ಬಿಣ, ಚಿನ್ನ, ಪೆಟ್ರೋಲು
ಗಣಿಯಾಳದಲ್ಲಿ
ಅದಿರು ಆಸೆಯ ಹೊಳೆ
ಕೈಯಲ್ಲಿ ಮಣ್ಣು Read the rest of this entry »
ನೀಲು
In ನೀಲುಗಳು, ಪದ್ಯ on March 8, 2008 at 5:52 amಮಾತಿಗೆ ಸಿಕ್ಕ ಒಂದು ಮಧ್ಯಾಹ್ನ
“ಗುಂಡಿಲ್ಲದೆ ಎಕ್ಸೈಟ್ಮೆಂಟ್ ಸಿಗೋದಾದರೆ ಕುಡೀಬೇಡಿ”
ಎಂದು ಹೇಳಿಕೊಂಡು ತನಗೊಬ್ಬಳಿಗೇ
ವಿಸ್ಕಿ ಸುರಿದುಕೊಳ್ಳುತ್ತಾ ತುಂಟ
ನಗೆಯಲ್ಲಿ ಮಗ್ನಳಾದಳು
(ಲಂಕೇಶ್ ಹುಟ್ಟು ಹಬ್ಬ-ನೆನಪು ಮತ್ತು ಮಹಿಳಾ ದಿನಾಚರಣೆ!)
ಬೆಳವಣಿಗೆ
In ನೀಲುಗಳು, ಪದ್ಯ on February 20, 2008 at 8:05 pmಹದಿನಾರರ ಈಚೆ
ಖುಷಿಯೂ ಅಳಲೂ ತಟ್ಟತಟ್ಟನೆ ದಟ್ಟ.
ಹದಿನಾರರ ಆಚೆ
ಖುಷಿ ಮತ್ತು ಅಳಲು
ಯಾವುದರೊಳಗೆ ಯಾವುದು
ಹುಡುಕಿಕೊಳ್ಳುವುದೇ ದೊಡ್ಡ ಪಾಠ.
ಕಾದಾಟ
In ನೀಲುಗಳು, ಪದ್ಯ on February 7, 2008 at 9:38 pmಎಷ್ಟು ಜಗ್ಗಾಡಿದರೂ
ಕಾವ್ಯವಾಗದ ಪದದ ಸಾಲಿಗೆ
ಗಿಲೀಟು ಮಾಡುವುದು ಬರೇ ಪೋಲು. Read the rest of this entry »
ಸುಲಭ
In ನೀಲುಗಳು, ಪದ್ಯ on January 21, 2008 at 9:53 pmಅರೆಬಿರಿದ ನನ್ನ ತುಟಿಗಳ ಮಾದಕತೆ
ನಲ್ಲನಿಗೆ ಮತ್ತೇರಿಸುವುದು
Read the rest of this entry »
ರುಚಿ
In ನೀಲುಗಳು, ಪದ್ಯ on January 10, 2008 at 5:59 amತೊಡೆ ಸೊಂಟ ಮತ್ತು ಮೊಲೆಯನ್ನು
ಗಂಡಸರು ಚಪ್ಪರಿಸುವಂತಾದಾಗ
ಚಂದದ ಕುಣಿತವೂ
ತನ್ನ ಪ್ರಶ್ನೆಯ ಮೊನಚು ಕಳಕೊಂಡು
ಅರೆಭಾವಕ್ಕೆ ಉತ್ತರದಂತೆ.
ಪಾಠ
In ನೀಲುಗಳು, ಪದ್ಯ on January 3, 2008 at 8:37 pmರೈಲು ಬ್ರಿಡ್ಜಿನಡಿ ತೊರೆಯ ನೀರಲ್ಲಿ
ಆಡುವ ಬಾತುಕೋಳಿ ಜೋಡಿ
ಉರುಳುವ ಗಾಲಿ ಎಬ್ಬಿಸುವ ನೀರ ಕಂಪನಕ್ಕೆ
ಮೈ ಒಡ್ಡುತ್ತ ನಲಿದಿದೆ
ನಾಗರಿಕತೆ
In ನೀಲುಗಳು, ಪದ್ಯ on December 28, 2007 at 5:10 am
ಹದ್ದು ಮೀರಿದ ನಗರಕ್ಕೆ ಸಾಕ್ಷಿ-
ಕೊಟ್ಟಿಗೆಯಲ್ಲಿ ಕರು
ಹಾಕಿ ಬಂದ ದನ ಬಸ್ಸ್ಟಾಂಡಿನಲ್ಲಿ
“ಅಂಬಾ”
ಎಂದು ಕೂಗುವುದು.
ಮಧ್ಯಸ್ತಿಕೆ
In ನೀಲುಗಳು, ಪದ್ಯ on December 12, 2007 at 10:26 am
ನಮ್ಮ ನೆರಳುಗಳನ್ನು
ಸಹಜ ನಿರ್ಲಜ್ಜೆಯಿಂದ
ತಬ್ಬಿಸುತ್ತಾನೆ ಬೆಳಗಿನ ಸೂರ್ಯ
ನನ್ನ ನಲ್ಲ ಸಿಟ್ಟಾಗಿ
ದೂರ ನಿಂತಾಗಲೂ ಕೂಡ
ಅಕ್ಷರತೆ
In ನೀಲುಗಳು, ಪದ್ಯ on December 7, 2007 at 9:41 pmಬೀದೀಲಿ, ಪೇಟೇಲಿ
ತಮತಮಗೆ ಬೇಕಾದ್ದನ್ನ
ನನ್ನ ಮುಖದ ಮೇಲೆ ಓದಿಕೋತಾರಲ್ಲ
ಜನ
ಅದು ಯಾವ ಭಾಷೇಲಿ
ಅಂತ ಕೇಳೋದು ಹೇಗೆ?
ಜಗದಗಲ
In ನೀಲುಗಳು, ಪದ್ಯ on November 30, 2007 at 5:34 am
ಸಿಡ್ನಿಯಲ್ಲಿ ಹುಲ್ಲು
ತರಿದು ಹಾಸಿದ ಕಾಂಕ್ರೀಟ್ ಅಂಗಳವನ್ನು
ಮುಚ್ಚಿಕೊಳ್ಳುವ ದರಲೆ ಗುಡಿಸುವಾಗ
ಮೂಲೆಯಲ್ಲಿ
ಕೊತ್ತಂಬರಿ ಸೊಪ್ಪಿನ ಕಂತೆ ಹಿಡಿದು
ಶಿಕಾಗೋದ ಏ.ಕೆ.ರಾಮಾನುಜಂ
“ಹಚ್ಚಗೆ” ನಗುತ್ತಾರಲ್ಲ!
ಸೇವೆ
In ನೀಲುಗಳು, ಪದ್ಯ on November 21, 2007 at 5:51 am
ಆಗಸಕ್ಕೇ ಪರದೆ ಹಿಡಿಯಲು ಹೊರಟ
ಮರ
ನಾಕು ಜನಕ್ಕೆ ಸೊಂಪಾದ
ನೆರಳಂತೂ ಆಗಿಯೇ ಆಯಿತು.
ಟೀಕೆ
In ನೀಲುಗಳು, ಪದ್ಯ on November 7, 2007 at 9:46 pmದಟ್ಟತೆ ತೆಳುವಾಗೋದನ್ನು ಸಹಿಸಲಾಗದೆ
ಹರೆಯದಲ್ಲೇ ನೇಣು ಹಾಕ್ಕೊಂಡು ಜೀವ ಬಿಟ್ಟ
ಗೆಳತಿ
ಮೊನ್ನೆ ನಲ್ಲನ ಮಾತಿಗೆ ನಾನು ಕುಲುಕುಲಿಸುವಾಗ
ನೋಡುತ್ತಾ ನಿಂತಿದ್ದಳು ಮರೆತುಬಿಟ್ಟೆಯ ಅನ್ನುವಂತೆ.
ಅಗತ್ಯ
In ನೀಲುಗಳು, ಪದ್ಯ on November 2, 2007 at 1:40 pmಪದ್ಯಕ್ಕೆರಡು
ಕಾಲಿರೋದು ಒಳ್ಳೇದಂತೆ
ನಿಲ್ಲೋದಕ್ಕೆ
ಜತೇನಲ್ಲಿ ಕುಣಿಯೋದಕ್ಕೆ
ಸಿಟ್ಟಾದವರ ಕೈಗೆ ಸಿಕ್ಕದ ಹಾಗೆ
ಓಡಿ
ಬಚ್ಚಿಟ್ಟುಕೊಳ್ಳೋದಕ್ಕೆ.
ದಿಕ್ಕು
In ನೀಲುಗಳು, ಪದ್ಯ on October 31, 2007 at 3:26 pmತಲೆಯಲ್ಲೇಳುವ ಅನುಮಾನ
ಮಾತಿನಲ್ಲಿ ಪ್ರಶ್ನೆಯಾಗುವುದು ಬಿಟ್ಟು
ಕಗ್ಗಂಟಾಗಿ ಎದೆಗಿಳಿದು
ಗಪ್ಪಾಗಿ ಬಿಗಿಯುವವರೆಗೂ
ಪದ್ಯ
ನುಡಿ ನಾಚಿಕೆಯಿಂದ ದೂರದಲ್ಲೇ ತುಟಿಕಚ್ಚಿ ನಿಲ್ಲುತ್ತದಲ್ಲ…!
ಪಲಾಯನ
In ನೀಲುಗಳು, ಪದ್ಯ on October 24, 2007 at 2:32 pmತಾನು ಬರೆದ ಬೃಹತ್ಗ್ರಂಥವನ್ನು
ಪಕ್ಕಕ್ಕೆ ಸರಿಸಿ
ನನ್ನನ್ನು ಹಿಡಿದು ಮುದ್ದಿಸುತ್ತಾನೆ ನನ್ನ ನಲ್ಲ;
ಅದರೊಳಗಿರುವ ಜೊಳ್ಳಿನ ಬಗ್ಗೆ
ನನ್ನ ಟೀಕೆಗೆ ಹೆದರಿಯೇ ಇರಬೇಕೆಂದು
ಅನುಮಾನಿಸಿದಾಗ
ಅವನ ಸಿಟ್ಟಿಗೆ ಪಾರವೇ ಇಲ್ಲ!
ಅಚ್ಚುಕಟ್ಟು
In ನೀಲುಗಳು, ಪದ್ಯ on October 11, 2007 at 6:59 amಬಿಸಿಲೇರುವವರೆಗೂ
ನನ್ನ ನಲ್ಲನ ತೋಳುಗಳ ನಡುವೆ
ಸರಸವಾಡಿ ಎದ್ದ ದಿನವೆಲ್ಲಾ ನಿದ್ದೆಗಣ್ಣು.
ಕೂದಲ ಜಿಡುಕಲ್ಲಿ ಆಲಸಿ ಬೆರಳು.
ಬಾಚಿ ಬಿಗಿದು ಕಟ್ಟಿದ ಕೂದಲ
ಏಕಾಂಗಿ ಗೆಳತಿ
ಏನೋ ನೆಪಮಾಡಿ ಸಿಡುಕುತ್ತಾಳೆ-
ಎದುರಾಡಲಿಲ್ಲ
ಎಂದಿನಂತೆ!
ಪ್ರಗತಿ
In ನೀಲುಗಳು, ಪದ್ಯ on September 24, 2007 at 6:53 amಬೆಳದಿಂಗಳಲ್ಲಿ ಬೆಳ್ಳಗೆ ನಿಂತ
ಅಪಾರ್ಟ್ಮೆಂಟಿನ ಎದುರಿನ ಹೆದ್ದಾರಿಯಲ್ಲಿ
ದಾರಿ ಕಾಣದೆ
ಎರಡು ಬಾತುಕೋಳಿಗಳ
ಚಟ್ಟೆಗಾಲಿನ ತಡಕಾಟ
ವಸಂತದ ವಿಷಾದ, ಏಪೆಕ್ ಮತ್ತು ಸೋಲ್ಸನಿತ್ಸಿನ್
In ಅಂದಂದು, ಪದ್ಯ, ಯೋಚನೆ on September 18, 2007 at 7:13 am
ಈ ಮರಣ ಪದ್ಯಕ್ಕೆ ಗಾಢವಾಗಿ ಪ್ರತಿಕ್ರಿಯಿಸಿದ ಇಲ್ಲಿ ಬ್ಲಾಗಿಸುವ ಟೀನಾ ಸೋಲ್ಸನಿತ್ಸಿನ್ನ “ಎ ಡೇ ಇನ್ ದ ಲೈಫ್ ಆಫ್ ಇವಾನ್ ಡೆನೀಸೊವಿಚ್” ನಾನು ಓದಬೇಕು ಎಂದು ಸೂಚಿಸಿದರು. ಓದಬೇಕು ಎಂದು ಈ ಹಿಂದೆ ಅಂದುಕೊಂಡಿದ್ದರೂ ಓದಲಾಗಿರಲಿಲ್ಲ. ಇದೊಂದು ಪ್ರೇರಣೆ ಸಾಕಾಯ್ತು. ಕೈಗೆತ್ತಿಕೊಂಡೆ.
ನಡುವೆ ಏಪೆಕ್ ಸಮಿಟ್ನ ಪ್ರೊಟೆಸ್ಟ್ನಲ್ಲಿ ಪಾಲ್ಗೊಂಡಾಗ ನಾನು ಹಲವರಿಗೆ ಉತ್ತರಿಸಬೇಕಾಗಿ ಬಂದ ಪ್ರಶ್ನೆ “ನೀನು ಏನನ್ನು ವಿರೋಧಿಸುತ್ತಿದ್ದೀಯ?” ಕೆಲಸ, ಹಣ ಆಸೆಗಳು ಎಲ್ಲ ಇರುವ ನಿನಗೆ ತೊಂದರೆ ಏನು? ಅಂದರೆ, ವಯ್ಯಕ್ತಿಕವಾಗಿ ನಿನಗೆ ಏನು ಅನ್ಯಾಯವಾಗಿದೆ? ಪ್ರಶ್ನೆ ಕೇಳಿದವರು ಉತ್ತರಿಸದ ನನ್ನನ್ನು ಒಂದು ಕ್ಷಣ ದಿಟ್ಟಿಸಿ, ಕೇಳಬಾರದಿತ್ತು ಎಂಬಂತೆ ತಟ್ಟನೆ ತಮ್ಮ ಕೆಲಸಕ್ಕೆ ವಾಪಸಾಗುತ್ತಾರೆ. ಅವರ ತಲೆಯಲ್ಲಿ ಪ್ರಶ್ನೆ. ನನ್ನ ತಲೆಯಲ್ಲಿ ಅದಕ್ಕೆ ಉತ್ತರವಾಗಲು ನಿರಾಕರಿಸುವ ಹಲವು ವಿಚಾರಗಳು.
ಸಿಡ್ನಿಯಲ್ಲಿ ವಸಂತ ಛಳಿಗಾಲದ ಬಟ್ಟೆ ಕಳಚಿ ಹೊಸ ಉನ್ಮಾದದಿಂದ ಕುಣಿಯುತ್ತಿದೆ. ಹಚ್ಚವಾಗಿ ನಗುವ ಬಿಸಿಲು. ಮಳೆ ಬಂದು ತೊಳೆದಿಟ್ಟ ನೆಲದಲ್ಲಿ ಹಸಿರು ಚಿಗುರು. ಎಲ್ಲ ಹೋದ ವರ್ಷದಂತೆಯೇ. ಆದರೆ ಈ ವರ್ಷ ಆಸ್ಟ್ರೇಲಿಯಾದ ಬರಗಾಲ ಕೊನೆಗಾಣುತ್ತಿರಬಹುದು ಎಂಬ ಉಲ್ಲಾಸವೂ ಇದೆ. ಅದು ಮನಸ್ಸನ್ನು ಹಗುರಾಗಿಸಿದೆ.
ಸೋಲ್ಸನಿತ್ಸಿನ್ ಸೈಬೀರಿಯಾದಲ್ಲಿ ಅಮಾನುಷವಾಗಿ ತಾನೇ ಬಂಧಿಸಲ್ಪಟ್ಟಿದ್ದ. ಹತ್ತಾರು ವರ್ಷ ಮಾರಣಾಂತಿಕ ಹಿಮದಲ್ಲಿ ಹಿಂಸೆ ಅನುಭವಿಸಿದ್ದ. ಸಾಯದೆ ಉಳಿದು ಪಾರಾಗಿ ತನ್ನ ಸೂಕ್ಷ್ಮತೆಯನ್ನು ಉಳಿಸಿಕೊಂಡಿದ್ದ. ಇವಾನ್ ಪಾತ್ರದ ಮೂಲಕ ತನ್ನ ಇಡೀ ಅನುಭವವನ್ನು ಒಂದು ದಿನದ ಆಗು ಹೋಗಿನಲ್ಲಿ ಪ್ರತಿಫಲಿಸುತ್ತಾನೆ. ಅವನು ಅಲ್ಲಿ ಯಾಕೆ ಬಂಧನದಲ್ಲಿದ್ದಾನೆ? ಕತೆಯ ಮೂರನೇ ಒಂದು ಭಾಗದವರೆಗೂ ಕತೆಗಾರ ಹೇಳುವುದಿಲ್ಲ. ನಂತರ ಅದನ್ನು ಸಹಜವಾಗಿ ಹೇಳುತ್ತಾನೆ. ಆದರೆ, ಅಷ್ಟರಲ್ಲಿ ಅದು ಗೌಣ ಎಂದು ಅನಿಸುವಲ್ಲಿಗೆ ಓದುಗ ಬಂದು ನಿಂತಿರುತ್ತಾನೆ. ಅದೊಂದು ಅಚ್ಚರಿ, ಆದರೆ ಸಹಜವೂ ಕೂಡ.
ನಮ್ಮ ವಯ್ಯಕ್ತಿಕದ ಆಚೆಗೆ ನಡೆಯುವ ಅನ್ಯಾಯ ನಮಗೂ ಸಂಬಂಧಪಟ್ಟಿದ್ದು. ಏಪೆಕ್ ಪ್ರೊಟೆಸ್ಟ್ ಬಗ್ಗೆ ನನ್ನನ್ನು ಪ್ರಶ್ನಿಸಿದವರಿಗೆ ಅದನ್ನು ಹೇಗೆ ಹೇಳಲಿ? ಮಾನವೀಯತೆ ಇಲ್ಲದ ಪರಿಸರ ನನ್ನ ಮಾನವೀಯತೆಯನ್ನೂ ಕಸಿದುಕೊಳ್ಳುತ್ತದೆ. ಹೇಗೆ ಅದನ್ನು ಅರ್ಥಮಾಡಿಸಲಿ? ಆರ್ಥಿಕ ಏಳಿಗೆಗೆ ಬಲಿಯಾಗುವವರು ಯಾರು? ಅವರು ಯಾಕೆ ಬಲಿಯಾಗಬೇಕು? ಈ ಪ್ರಶ್ನೆಗಳನ್ನೆಲ್ಲಾ ಹೇಗೆ ಉತ್ತರವನ್ನಾಗಿ ಮಾರ್ಪಡಿಸಿ ಪ್ರಶ್ನಿಸದವರ ಮುಂದೆ ಹಿಡಿಯಲಿ? ಒಳಗೊಳಗೇ ಇದೆಲ್ಲದರ ಜತೆ ಗುದ್ದಾಡುತ್ತಿದ್ದೇನೆ. ಆದರೆ ಹೊರಗೆ ನಗುತ್ತೇನೆ.
ವಸಂತದ ಬಿಸಿಲಿಗೆ ಮುಖವೊಡ್ಡಿ ಅಸಾಧಾರಣ ಸ್ವಾಸ್ಥ್ಯ ಅನುಭವಿಸುತ್ತೇನೆ. ವಸಂತಕ್ಕೆ ತಾನು ಕೊಂಚ ಬೇಗ ಬಂದುಬಿಟ್ಟೆನೆ ಎಂಬ ಅನುಮಾನ. ಮತ್ತೊಂದು ವಾರ ಮಳೆ, ಛಳಿ. ಜನರಿಗೂ ಕೊಂಚ ಗಲಿಬಿಲಿ. ನಿಜವಾಗಿಯೂ ಇದು ವಸಂತವೇ? ವಸಂತ ಬಂದು ಬಿಟ್ಟಿತೆ? ಮರೆತು ಬಿಟ್ಟೆನೆ? ವಸಂತವೆಂದರೆ ಇದೇನೆ? ಇದು ನೋಡಿ ಯಾವಾಗಲೂ ಹೀಗೆ. ಕಾಲ ಬದಲಾಗುವುದು ಸ್ವಿಚ್ ಹಾಕಿದ ಹಾಗಲ್ಲ. ವಿದ್ಯುತ ದೀಪ ಹಾಕಿ ಆರಿಸಿದಂತಲ್ಲ. ಅದು ನಿಧಾನಕ್ಕೆ ಅನುಮಾನದಿಂದ ಜರುಗುತ್ತದೆ. ಅದಕ್ಕೆ ಹಲವಾರು ಸಣ್ಣ ಸಣ್ಣ ಒತ್ತಡಗಳಿರಬೇಕಾಗುತ್ತದೆ. ಅದನ್ನು ನಾನು ನೀವು ತರಬೇಕಷ್ಟೆ. ಸಣ್ಣ ಸಣ್ಣ ಪ್ರಮಾಣದಲ್ಲಾದರೂ ಸರಿಯೆ.
ಸೋಲ್ಸನಿತ್ಸಿನ್ ವಿವರಿಸುವ ದಿನವೂ ಅದರ ಹಿಂದಿನ ದಿನದಿಂದ ಬೇರೆಯಾಗಿ ಕೊಯ್ದಿಟ್ಟದ್ದಲ್ಲ. ಹಿಮದಲ್ಲಿ ಇಡೀ ದಿನ ಒದ್ದಾಡಿ ರಾತ್ರಿ ತನ್ನ ಹಾಸಿಗೆಯ ಹರಕು ಬಟ್ಟೆ, ತೂತು ಕಾಲುಚೀಲಗಳಲ್ಲೇ ಶಾಖ ಹುಟ್ಟಿಸಿಕೊಳ್ಳುವುದು. ಮತ್ತೆ ರೋಲ್-ಕಾಲ್ ಕರೆದು ಬಿಟ್ಟಾರು ಎಂದು ಹೆದರುತ್ತಾ ದೇಹ ನಿದ್ದೆಗಿಳಿಯುವುದು. ಆ ನಿದ್ದೆಯೊಂದೆ ಹಿಂದಿನ ದಿನದಿಂದ ಮುಂದಿನ ದಿನವನ್ನು ಬೇರ್ಪಡಿಸುವುದು. ಓದುತ್ತಿರುವ ವಸಂತದಲ್ಲಿ ನನ್ನನ್ನು ಇವೆಲ್ಲಾ ನಡುಗಿಸುತ್ತದೆ. ಅವನಿಗೆ ನಿದ್ದೆ ಅಗತ್ಯ. ಆದರೆ ಇವಾನ್ ಮಾಡುವ ನಿದ್ದೆ ಎಚ್ಚರ ತುಂಬಿದ ನಿದ್ದೆ. ನಿದ್ದೆಯಲ್ಲೂ ತಪ್ಪು ಮಾಡಿಬಿಟ್ಟರೆ?
ಏಪೆಕ್ ಪ್ರೊಟೆಸ್ಟಿಗೆ ಹೋಗಲು ಏನು ಕಾರಣ ಎಂದು ಕೇಳುವುದೇ ಒಂದು ರಾಜಕೀಯ ಪ್ರಶ್ನೆ ಅನ್ನಿಸಿತು. ಹಲವಾರು ಕಾರಣ ಕೊಟ್ಟು ಸಮರ್ಥಿಸಿಕೊಳ್ಳಬಹುದು. ನಾನು ಅನ್ನುವ ಇದು, ನಾನೊಬ್ಬನೇ ಅಲ್ಲ. ನಾನು ನನ್ನ ಸಮುದಾಯ, ನಾನು ನನ್ನ ಸಮಾಜ ಕೂಡ. ಅದಕ್ಕೆ ಹಿಡಿದ ಹುಳುಕು ನನಗೂ ಹಿಡಿದ ಹಾಗೆ. ನಾನು ನಿದ್ದೆ ಮಾಡುತ್ತಿಲ್ಲ. ಎಚ್ಚರವಾಗಿದ್ದೀನಿ. ಹಾಗೆಂದು ನನಗೆ ನಾನೇ ಹೇಳಿಕೊಳ್ಳುವ ಒಂದು ವಿಧಾನ ಇದು. ಚೆನ್ನಾಗಿ ನಿದ್ದೆ ಮಾಡವಂಥ ಸ್ವಸ್ಧ ಪರಿಸರದಲ್ಲಿ ಏಕೆ ನಿದ್ದೆಗೆಡಬೇಕು? ಎಚ್ಚರ ಸವಲತ್ತಲ್ಲ. ಎಚ್ಚರ ಹೊಟ್ಟೆ ತುಂಬಿದವರ ಸೌಖ್ಯವಲ್ಲ. ಅದೊಂದು ಅಗತ್ಯ. ಅಸಹನೆಯನ್ನು ಹಂಚಿಕೊಳ್ಳುವುದೂ ಅಷ್ಟೆ.
ಸೋಲ್ಸನಿತ್ಸಿನ್ ಕತೆಯನ್ನು ೧೯೬೨ರಲ್ಲಿ ಸೋವಿಯತ್ ಪ್ರಧಾನಿ ಕೃಷೇವ್ನ ಪರವಾನಗಿ ಪಡೆದು ಪ್ರಕಟಿಸಿದರಂತೆ. ಅದು ಕಾಲಮಾನದಲ್ಲಿ ತುಂಬಾ ದೂರದ ಸಂಗತಿ. ರಾಜಕೀಯ ಪರಿಸ್ಥಿತಿಯಲ್ಲೂ ಕೂಡ. ಹಾಗಾಗಿಯೇ ಇವಾನ್ ಕತೆ ಚರಿತ್ರೆಯಂತೆ ಕಾಣುತ್ತದೆ. ಆದರೆ ಒಂದು ವಿಪರ್ಯಾಸ ನೋಡಿ. ಮರಣ ಪದ್ಯ ಕೂಡ, ಲೋಕದಲ್ಲೇ ಅತಿ ಹೆಚ್ಚು ಸ್ವಾತಂತ್ಯ್ರವಿರುವ ಅಮೇರಿಕದಂಥ ದೇಶದ ಆಡಳಿತದ ಪರವಾನಗಿ ಪಡೆದು ಪ್ರಕಟವಾಗಬೇಕಾಯಿತು.
ನೋಡಿ – ನಿದ್ದೆ ವಿಪರ್ಯಾಸಗಳನ್ನು ಒಂದಕ್ಕೊಂದು ಹೊಂದಿಸಿಬಿಡುತ್ತದೆ. ಅದನ್ನು ಕನಸಾಗಿ ಹೆಣೆದು ನಾವು ಅದರಲ್ಲಿ ಕಳೆದುಹೋಗುವಂತೆ ಮಾಡಿಬಿಡುತ್ತದೆ. ಎಚ್ಚರ ಮಾತ್ರ ಅದರೊಡನೆ ಗುದ್ದಾಡ ಬೇಕಾಗುತ್ತದೆ.
ವಸಂತದ ಅನುಮಾನ ಈಗ ವಿಷಾದವಾಗಿ ಕಾಡುತ್ತದೆ. ವಿಷಾದದಿಂದ ಕೈಚೆಲ್ಲದೆ, ವಿಷಾದವನ್ನು ಇಟ್ಟುಕೊಂಡೂ ಎಚ್ಚರವಾಗಿರುವುದು ಪಡಬೇಕಾದ ಪಾಡಷ್ಟೇ ಅಲ್ಲ. ಅದು ಜವಾಬ್ದಾರಿ ಕೂಡ. ಅದನ್ನು ನನಗೆ ನಾನೇ ಆಗಾಗ ಹೇಳಿಕೊಳ್ಳುವುದೂ ಮುಖ್ಯ. ಅದು ಯಾವ ರೀತಿಯಲ್ಲಾದರೂ ಆಗಬಹುದು.
ಇವಾನ್ ಹಿಮದ ಆಳದಲ್ಲಿ,
ವಸಂತಕ್ಕೆ ಎದುರು ನೋಡುತ್ತಾ,
ಸಣ್ಣಪುಟ್ಟ ಪ್ರತಿರೋಧವನ್ನು ತೋರಿಸುತ್ತಾ ಬದುಕುಳಿದ ಹಾಗೆ,
ತೋರಿಸಿದ್ದರಿಂದಲೇ ಬದುಕುಳಿದ ಹಾಗೆ…
ಅಂಕುರ
In ನೀಲುಗಳು, ಪದ್ಯ on September 17, 2007 at 6:41 amಯಾಕೆ
ಪದ್ಯ ಹುಟ್ಟುವ ಮೊದಲೇ
ಪದಗಳ ಕುಲಾವಿಯ ಸಡಗರ?
ಹುಟ್ಟಿದ ಮೇಲೋ-
ತೊದಲು, ಜೊಲ್ಲು,
ಅಕಸ್ಮಾತ್
ನಿದ್ದೆಯಲ್ಲೇ ನಗುವ ಚಮತ್ಕಾರ!
ನೇರನುಡಿ
In ನೀಲುಗಳು, ಪದ್ಯ on September 10, 2007 at 11:08 pmವಕ್ರೋಕ್ತಿ ಪಂಡಿತನಿಗೆ
ಒಳಗೊಳಗೇ
ಬಾಣದಂತೆ ನುಡಿವ ಹಂಬಲವಂತೆ;
ಅದಕ್ಕಾಗಿ ಮನಸ್ಸನ್ನು ಬಿಲ್ಲಂತೆ
ಬಗ್ಗಿಸುವುದು ತನ್ನಿಂದಾಗದು
ಎಂದು ಕೊಂಕಾಡಿ ನಕ್ಕನಂತೆ.
ಬೇಟ
In ನೀಲುಗಳು, ಪದ್ಯ on September 3, 2007 at 7:00 amಪದ್ಯದ ಬೇಟೆ ಆಡಿ
ಸೋತು ಹೂಂಕರಿಸುವ ಕವಿಯ ಬೆನ್ನ ಹಿಂದೆ
ಕುಲುಕುಲು ನಗುತ್ತಾ
ಚಿಗರೆಯಂತೆ ಕುಣಿವ
ಪದ್ಯದ
ಕ್ರೌರ್ಯ ಮತ್ತು ಉಪಟಳ
ಹಾಸ್ಯ ಮೀರಿದ ವಾಸ್ತವ.
ಗೆಳೆಯ
In ನೀಲುಗಳು, ಪದ್ಯ on August 29, 2007 at 6:54 amತುಂಬ ದಿನದ ಮೇಲೆ
ಎಲ್ಲೋ ಸಿಕ್ಕ ನನ್ನ ನಲ್ಲನ ಕ್ಷೌರಿಕ-
ನಲ್ಲನ ಉದ್ದಗೂದಲಿನ ಸೊಗಸುಗಾರಿಕೆ
ನೋಡಿಯೂ ನೋಡದವನಂತೆ
ಹೇಗಿದ್ದೀರೆಂದು ಮಾತ್ರ ವಿಚಾರಿಸಿ
ಬೀಳ್ಕೊಟ್ಟ
ದೊಡ್ಡ ಮನಸ್ಸಿನ ವಿಶಾಲತೆಯಲ್ಲಿ.
ಗ್ವಂಟಾನಮೋ ಪದ್ಯ
In ಪದ್ಯ on August 23, 2007 at 10:08 pmಪೋಯಮ್ಸ್ ಫ್ರಂ ಗ್ವಂಟಾನಮೋ: ದ ಡಿಟೈನೀಸ್ ಸ್ಪೀಕ್
ಸಂಪಾದಕ : ಮಾರ್ಕ್ ಫಾಲ್ಕಾಫ್
ಇದು ಗ್ವಂಟಾನಮೋದಲ್ಲಿನ ಹದಿನೇಳು ಸೆರೆಯಾಳುಗಳ ಇಪ್ಪತ್ತೆರಡು ಪದ್ಯಗಳ ಪುಟ್ಟ ಪುಸ್ತಕ. ಈಗಷ್ಟೇ ಪ್ರಕಟಗೊಂಡಿದೆ. ಇದರ ಸಂಪಾದಕ ಬಂಧಿತರ ಲಾಯರ್ನಾಗಿ ಕೆಲಸ ಮಾಡಿದಾತ. ಅವರು ಬರೆದ ಪದ್ಯಗಳನ್ನು ಕದ್ದು ಹೊರಗೆ ಜಗತ್ತಿಗೆ ತಂದಾತ. ಈಗ ಪೆಂಟಗಾನ್ ಒಪ್ಪಿಗೆ ಕೊಟ್ಟ ಪದ್ಯಗಳನ್ನು ಮಾತ್ರ
ಈ ಪುಸ್ತಕದಲ್ಲಿ ಪ್ರಕಟಿಸಿದ್ದಾನೆ.
ಇಷ್ಟು ವರ್ಷಗಳಲ್ಲಿ ಗ್ವಂಟಾನಮೋದ ನೀರವ ಮೌನದಿಂದ ಹೊರಬಂದಿರುವ ಒಂದೇ ದನಿ ಇದು.
ಪುಸ್ತಕದಲ್ಲಿರುವ ಈ ಒಂದು ಪದ್ಯದ ಕವಿ ಬಹರೇನಿನ 33 ವರ್ಷದ ಜಮ್ಹಾ ಅಲ್ ದೊಸರಿ. ೨೦೦೧ರಿಂದ ಗ್ವಂಟಾನಮೋದಲ್ಲಿ ಯಾವುದೇ ಕೇಸಿಲ್ಲದೆ ಸೆರೆಯಲ್ಲಿದ್ದಾನೆ. ಈತ ಹತ್ತಾರು ಬಾರಿ ಜೀವ ತೆಗೆದುಕೊಳ್ಳಲು ಪ್ರಯತ್ನಪಟ್ಟಿದ್ದಾನೆ.
ಈತನಿಗೆ ಮನೆಯಲ್ಲಿ ಪುಟ್ಟ ಹೆಣ್ಣು ಮಗಳಿದ್ದಾಳೆ. ತಂದೆ ಮಾರಣಾಂತಿಕ ಬೇನೆಯಿಂದ ಬಳಲುತ್ತಿದ್ದಾನೆ. ಸಾಯುವ ಮುಂಚೆ ಮಗನನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾನೆ.
ಅನುವಾದವನ್ನು ಬರೆದು ಹಾಕುವ ಬದಲು ಹೇಳಬೇಕು, ನೀವು ಕೇಳಬೇಕು ಅನಿಸಿದೆ.
ಈ ಕೆಳಗೆ ಕೇಳಿ ಅವನ death poem ಎಂಬ ಪುಟ್ಟ ಪದ್ಯದ ಕನ್ನಡ ರೂಪ:
http://home.exetel.com.au/anivaasi/maranapadya.mp3
ಅವತಾರ
In ನೀಲುಗಳು, ಪದ್ಯ on August 20, 2007 at 6:40 amಕೊಲೆಯ ಕತೆ ಹೇಳಿ ಮೈ ನಡುಗಿಸಿ
ನಡುರಾತ್ರಿ ಮಾಯವಾಗುವ ನಲ್ಲ
ಮುಂಜಾವದ ಕನಸಲ್ಲಿ ಕಾಣಿಸಿಕೊಂಡು
ನಾಚಿಕೆ ಬಿಟ್ಟು ತಬ್ಬುವುದು
ಆಕಸ್ಮಿಕವಲ್ಲ
ಅವನ ಇನ್ನೊಂದು ಮಗ್ಗುಲು ಅಷ್ಟೆ.
ಹೂತಿದ್ದು
In ನೀಲುಗಳು, ಪದ್ಯ on August 16, 2007 at 10:26 pmಸಂದಣಿಯಲ್ಲೆಲ್ಲೋ
ಅಕಸ್ಮಾತ್ ಕಿವಿಗೆ ಬಿದ್ದ
ಯಾರದೋ ತುಂಡು ಮಾತು
ಹತ್ತಾರು ವರ್ಷದ ಮೇಲೆ ಧಿಗ್ಗನೆ ಅರ್ಥ ಹೊಳೆಸಿ
ದಿನವಹಿ ಮಾತುಗಳನ್ನು
ಕರುಣೆಯಲ್ಲಿ ತೊಳೆಯುತ್ತದೆ.
ಮುಕ್ತಾಯ
In ನೀಲುಗಳು, ಪದ್ಯ on August 7, 2007 at 10:31 pm“ಕಾಲಚಕ್ರ ಉರುಳಿದಂತೆ
ಬದುಕಲ್ಲಿ ಬಂದದ್ದು ಹೋಗುತ್ತದೆ,
ಹೋದದ್ದು ಬರುತ್ತದೆ”
ಎಂಬ ಅವನ ಉಪದೇಶ ಕೇಳಿ
-”ಆ ಚಕ್ರದ ನಡು ಎಲ್ಲಿದೆ?”
-”ಯೌವ್ವನ ಯಾವಾಗ ಮರಳತ್ತೆ?”
ಎಂದೆಲ್ಲಾ ಅವನನ್ನು ಮುದ್ದಿಸಿ
ಚರ್ಚೆಯನ್ನೇ ನಾಚಿಸಿಬಿಟ್ಟಳು ತುಂಟಿ.
ಗೋಡೆ
In ನೀಲುಗಳು, ಪದ್ಯ on July 27, 2007 at 7:02 amಕಿವಿಯಲ್ಲಿ ಐಪಾಡ್
ಬೆಳೆದವನ ಪಕ್ಕದಲ್ಲೇ
ಗಳಗಳ ಅತ್ತರೂ ಅವನು
ನಿಶ್ಚಿಂತ…
ನೆಪ
In ನೀಲುಗಳು, ಪದ್ಯ on July 25, 2007 at 6:47 amಹಾದರಕ್ಕಿಳಿದ ಗಂಡನ ಕತ್ತಿನಪಟ್ಟಿ
ನನ್ನ ಮುಷ್ಟಿಯಲ್ಲಿ ಕೊಸರುವಾಗ
“ಮಹಾಭಾರತದಲ್ಲೇ ಹಾದರವಿದೆ…” ಎಂಬ ಅವನ
ಒಡಕು ದನಿಯ ಸಣ್ಣ ಮಾತು
ನನ್ನ ಮುಟ್ಟದೆ
ಅಷ್ಟು ದೂರ ನಡುಗಾಳಿಯಲ್ಲಿ
ತತ್ತರಿಸಿತು.
ಗಂಡಾಂತರ
In ನೀಲುಗಳು, ಪದ್ಯ on July 20, 2007 at 6:54 amಮರ ಕಡಿದು
ನೆಟ್ಟ ಲೈಟ್ ಕಂಬದ ತುದಿಯಲ್ಲಿ
ಎರಡು ಮರಿ ಹಕ್ಕಿಗಳು
ಕೊಕ್ಕಿಗೆ ಕೊಕ್ಕು ತಿಕ್ಕುತ್ತಿದ್ದವು
ನಿರಂತರ ಪ್ರೇಮದ ಮುಗ್ಧತೆಯಲ್ಲಿ.
ದೂರ ಎಲ್ಲಿಯೋ ಬೆಂಗಳೂರು
In ಪದ್ಯ on July 18, 2007 at 10:48 pmಹೀಗೆಲ್ಲಾ ನನ್ನ ಪ್ರೀತಿಯ ನಗರವನ್ನು ನೆನಪಿಸಿಕೊಳ್ಳುತ್ತೇನೆ-
“ನಿನ್ನ ಗಲ್ಲಿ ಬಯಲು ವನದಲ್ಲಿ ಪ್ರೀತಿಸಿದ್ದೆ
ನಿನ್ನ ಸಂಜೆ ಬೆಳಗು ನಡುಹಗಲ ಬಿಸಿಲಲ್ಲಿ ಪ್ರೀತಿಸಿದ್ದೆ
ನಿನ್ನ ಸೊಮಾರಿ ಹಾಗೂ ಗಡಿಬಿಡಿಯ ದಿನಗಳಲ್ಲಿ ಪ್ರೀತಿಸಿದ್ದೆ
ನಿನ್ನ ಜನ ನಿಬಿಡಗಳಲ್ಲಿ ಜನ ರಹಿತಗಳಲ್ಲಿ ಪ್ರೀತಿಸಿದ್ದೆ
ನಿನ್ನ ಬೆಳದಿಂಗಳಲ್ಲಿ ಕಗ್ಗತ್ತಲಲ್ಲಿ ಪ್ರೀತಿಸಿದ್ದೆ”
ಈಗ ಇಲ್ಲಿ ಕೂತು ಮತ್ತೆ ನನ್ನ ಹರಕು ನೆನಪಲ್ಲಿ
ಪ್ರೀತಿಸುತ್ತೇನೆ
ನಿನ್ನ
ಪ್ರೀತಿಯ ದಿನಗಳನ್ನು
ರಾತ್ರಿಗಳನ್ನು
ರಸ್ತೆ ಕಾಲುದಾರಿ ತಿಪ್ಪೆಗಳನ್ನು
ಬೆಟ್ಟ ಕೊಳ ಕೊಳಚೆಯನ್ನು
ಹಸಿರು ಹುಲ್ಲು ಮತ್ತು ಕೆಸರನ್ನು
ನನ್ನ ಹರಕು ನೆನಪಲ್ಲಿ
ಈಗಲೂ ಪ್ರೀತಿಸುತ್ತೇನೆ ಎಲ್ಲವನ್ನು.
ಮಾರ್ಪಾಡು
In ನೀಲುಗಳು, ಪದ್ಯ on July 17, 2007 at 9:45 pmರೈಲು ಹೊರಟಾಗ
ಚಿಲಿಪಿಲಿ ನಗುವಿನ ಗೆಳತಿಯರು-
ತಮ್ಮ ಊರು ಬಂದಾಗ
ಮೌನ ತೊಟ್ಟು ಇಳಿದರೆ
ಕರೆದೊಯ್ಯಲು ಬಂದ ಗಂಡಂದಿರ ದನಿ ಮಾತ್ರ
ರೈಲಿನ ಶಿಳ್ಳೆಯ ಜತೆ
ಜಗಳಕ್ಕಿಳಿಯಿತು.
ಜೀವನೀತಿ
In ನೀಲುಗಳು, ಪದ್ಯ on July 10, 2007 at 9:42 pmಚಿಗುರು ಮೀಸೆ, ಎಳೆ ಮೊಲೆಗಳ ಕೌಮಾರ್ಯ
ಮೋಹ ಹಾಗು ಕಾಮದ ಕುರುಡಿಂದ
ಹುಚ್ಚಾಗದೆ ಹೋದರೆ
ಯವ್ವನದ ಸೊಕ್ಕು
ದೇಶ ಹಾಗು ನೆಲದ, ಆದರ್ಶ ಮತ್ತು ನಿರಾಶೆಯ
ಕಾಟಕ್ಕೆ ಕಂಗೆಡದೇ ಹೋದರೆ
ನಡುವಯಸ್ಸಿನ ಬಿರುಸಲ್ಲೇ
ಜಪಮಣಿ-ಪಾರಮಾರ್ಥ ಸುತ್ತಿಕೊಳ್ಳುವುದನ್ನು
ತಪ್ಪಿಸಲಾದೀತೆ?
ತಲುಪುವುದಕ್ಕಲ್ಲ
In ಪದ್ಯ on July 6, 2007 at 10:54 pmಪಯಣಗಳಿಂದು ತಲುಪುವುದಕ್ಕಲ್ಲ.
ತಲುಪಿದರೂ ಮತ್ತೆ ಹೊರಡುವುದಕ್ಕೆ
ತಂಗುದಾಣಗಳೇ ಎಲ್ಲ ಚಣ ನಿಂತು
ಕಾಫಿ ಹೀರಿ, ಎಲೆಯಡಿಕೆ ಅಗಿದು ಉಗಿಯಲಿಕ್ಕೆ.
ಗಂಟು ಮೂಟೆ ಇಳಿಸಿ ಬಂಧುಮಿತ್ರರ ಅಪ್ಪಿ
ಉಸ್ಸಪ್ಪ ನಿಲ್ದಾಣಗಳಲ್ಲ ದಾರಿಗುಂಟ ಸಿಕ್ಕುವುದೆಲ್ಲ.
ಇಲ್ಲಿರುವರಿಗೆ ಅಲ್ಲಿರುವ ಕನಸು, ಅಲ್ಲಿರುವರಿಗೆ ಇನ್ನೆಲ್ಲಿಯೋ ಕಣ್ಣು
ತಲುಪಿದರೂ ಗೊತ್ತಿರದೆ ಇರಬೇಕಾದ್ದು ಇನ್ನೆಲ್ಲೋ
ಅನ್ನಿಸುವ ಗಗನಚಿತ್ರದ ಹಾಗೆ;
ಜತೆಯಲ್ಲೇ ನಡೆದೂ ಬೇರೆಲ್ಲೋ ಮುಟ್ಟುವ ಬಗೆಗೆ
ಆತಂಕ ಯಾಕೆ?
ಅವರವರ ಭಾವಕ್ಕೆ ಎಂಬುದೇ ಸರಿಯಲ್ಲವೇ ಸನ್ನಿವೇಶಕ್ಕೆ?
ಅಲ್ಲಿ ಮುಟ್ಟುವ ಬಯಕೆ ಇದ್ದರೂ
ಮುಟ್ಟಿಸುವುದೆ ನೆಚ್ಚಿರುವ ದಾರಿ?
ಚಪ್ಪಲಿ ಸವೆದರೂ ಸವೆದೀತೆ
ದಿಕ್ಕುದೆಶೆ ಆಶೆಗಳ ಅವಶೇಷಗಳ ದಾರಿ?
ಮುರಿದು ಬಿದ್ದಿದೆ ಬೆಳಕು
ಕಂಡು ಕಾಣದ ಹೊಳಪು
ತಬ್ಬಲಿ ಪಯಣಿಗನ ಸಂಗಾತಿಯೆಲ್ಲಿ?
ಕೈಗಂಬ ಎದೆ ಸೆಟೆಸಿ ನಿಂತಿದ್ದ
ಕವಲು ದಾರಿಯ ಮೂಲೆ ಖಾಲಿ;
ನಿನ್ನ ಅಂಗೈಗೇ ಬಂದು ಹುಗಿದು ನಿಂತಿದೆ ಕಂಬ
ಬೇಕಾದತ್ತ ತಿರುಗಿಸಿಕೊ; ಹುಮ್ಮಸ್ಸು
ಕಡಿಮೆಯಾಗದ ಹಾಗೆ ನೋಡಿಕೋ
ಅಲ್ಲಿ ತಲುಪುವ ಆಸೆ ಬಿಟ್ಟು.
ನೀನು ಅಗ್ರೇಸರನಲ್ಲ, ವಿದೂಷಕನೂ ಅಲ್ಲ,
ಎದುರಾಳಿಯ ಎದೆಗಾರಿಕೆ ಮೊದಲೇ ಇಲ್ಲ
ಹಾಗೆಂದು ಅಳಬೇಡ, ತಲುಪದಿದ್ದರೂ ನೆನಪಿಡು
ಪಯಣ ಬಿಡಬೇಡ.
ಬೇರೆಲ್ಲ ಮರೆತರೂ
ಇದು ಮರೆಯತಕ್ಕದ್ದಲ್ಲ-
ಪಯಣಗಳಿಂದು ತಲುಪುವುದಕ್ಕಲ್ಲ.
ಪೋಲಿ ಭಜನೆ
In ನೀಲುಗಳು, ಪದ್ಯ on July 5, 2007 at 10:43 pmಸಂತ ಕವಿಯ
ಪೋಲಿ ಪದ್ಯದ ಸೊಲ್ಲುಗಳೆಲ್ಲಾ
ಭಜನೆಯಂತಿದೆ ಎಂಬ ಪೋಲಿಗಳ,
ಪೋಲಿಯಾಗಿದೆ ಎಂಬ ಭಕ್ತಾದಿಗಳ
ಚೀತ್ಕಾರ-
ಸಂತ ಕವಿಯ ಗಂಟು ಮುಖದಲ್ಲಿ
ನಗುವಿನ ಸಣ್ಣ ಗೆರೆ ಎಬ್ಬಿಸಿದ್ದು ನೋಡಿದಿರ?
ಲಂಕೇಶ್ ಬ್ಲಾಗ್: ನೀಲು ಕಾವ್ಯ ಮತ್ತು ನೀಲುಗಳು
In ನೀಲುಗಳು, ಪದ್ಯ, ಪುಸ್ತಕ on June 26, 2007 at 7:50 pmಜಾಣ ಜಾಣೆಯರ “ಲಂಕೇಶ್ ಪತ್ರಿಕೆ”ಯಲ್ಲಿ ಲಂಕೇಶರು ನೀಲು ಅನ್ನೋ ಹೆಸರಿನಡಿ ಪದ್ಯಗಳನ್ನು ಬರೀತಿದ್ದರು. ನಾನಂತೂ ಅವುಗಳನ್ನಷ್ಟೇ ಓದಿ ಪತ್ರಿಕೆ ಮುಚ್ಚಿಡುತ್ತಿದ್ದ ದಿನಗಳಿದ್ದವು! Read the rest of this entry »
ನೆರಳು
In ನೀಲುಗಳು, ಪದ್ಯ on June 15, 2007 at 2:12 pmನನ್ನ ಬಳುಕದ ಮನಸ್ಸಿನ ಮೇಲೆ ನಿನ್ನ ನೆರಳು
ನೆರಳಲ್ಲೂ ಕೆಂಪು ಹೂ
ಗಿಡದ ಚಿಗುರು.
ನಿನ್ನ ತೊನೆಯುವ ಮೈ ಮೇಲೆ ನನ್ನ ನೆರಳು
ತೇವದಲ್ಲಿ
ಮಣ್ಣುಳ
ಜಿಗಣೆ
ಇರುವೆಗೂಡು.
ಡೌಲು
In ನೀಲುಗಳು, ಪದ್ಯ on June 14, 2007 at 8:42 pmನನ್ನ ಚಂದದ ತುಟಿಗಳನ್ನು
ನೋಡಲು ನಿನಗೆ
ಡೌಲಿಗಿಂತ ನಾಚಿಕೆಯಾಗುವುದೇ
ನನಗೆ ಇಷ್ಟ.
ಆದರೆ ನಾಚಿಕೆ ಮುಚ್ಚಲು ಹೋಗಿ ನೀನು
ತುಟಿಬಿಗಿದು ಡೌಲನ್ನೇ ಮೆರೆಸುತ್ತೀಯ!
ತಾಳಬದ್ಧ
In ನೀಲುಗಳು, ಪದ್ಯ on June 13, 2007 at 10:19 pm“ನನ್ನ ಕನಸಿನ ಪಕಳೆಯಲಿ ನೀ ನಿದ್ದೆ ಮಾಡುವ ಹುಡುಗನಂತೆ
ನಿನ್ನ ಕನಸಿನ ನೆರಿಗೆಯಲಿ ನಾ ಸುತ್ತಿ ಅಲೆಯುವ ಹುಚ್ಚಿಯಂತೆ”
ಎಷ್ಟು ತಾಳಬದ್ಧವಾದರೇನು ಬಂತು-
ನನ್ನ ಕನಸಲ್ಲಿ ನಿನ್ನ ಉಡಾಫೆ
ನಿನ್ನ ಕನಸಲ್ಲಿ ನನ್ನ ಮಗ್ನತೆ
ಗೊತ್ತಾಗದ ಮೇಲೆ!
ಮದ್ದು
In ನೀಲುಗಳು, ಪದ್ಯ on June 10, 2007 at 8:10 amನಿನ್ನ ಕುರುಡಿಗೆ
ನನ್ನ ಸೊಂಟ, ಎದೆ, ತುಟಿ, ಕಣ್ಣು, ಹುಬ್ಬು, ಹೆರಳು
ಇವುಗಳದೇ ಸಂಭ್ರಮ
ನನ್ನ ದಿಟ್ಟ ಹೆಜ್ಜೆ ನಡುವಿನ ಅನುಮಾನ
ಮತ್ತು ಗಟ್ಟಿ ದನಿಯಾಳದ ನಡುಕ
ನಿನ್ನ ಸಂಭ್ರಮಕ್ಕೆ ಮದ್ದರೆಯುತ್ತವೆ
ಮೌನವಾಗಿ.
ಮದುವೆ
In ನೀಲುಗಳು, ಪದ್ಯ on June 7, 2007 at 3:22 pmಮಳೆಗೆ ಹಿಡಿದ ಕೊಡೆಯ ನೆರಳು
ಶಲ್ಯವಿಳಿದ ನರಿಯ ಹೆಗಲು
ಗೆಜ್ಜೆತೊಟ್ಟ ಕಾಗೆ ಕಾಲು
ಹೊಳೆವ ಹನಿಯ ತೋರಣ
ದುಗುಡ ಕೇಕೆ ದಿಬ್ಬಣ
ಸವಾಲು
In ನೀಲುಗಳು, ಪದ್ಯ on June 6, 2007 at 11:24 pmಹೇಳೊ ಹುಡುಗಾ-
ಒಣಗನಸಿನ ಬಣವೆಯಲ್ಲಿ
ಹುಡುಕುವೆಯಾ ಕಳೆದ ಹಸಿರು?
ಇಲ್ಲಿ ಉತ್ತರಕ್ಕೆ ತಿರುಗಿ
ಕಾದ ಸೂಜಿ
ಗಲ್ಲು ಮನಸು!
ಉಳಿದಿದ್ದು
In ಪದ್ಯ on June 4, 2007 at 4:03 pmಪ್ರೇಮದಮಲಿಳಿದ ಮೇಲೆ
ನನ್ನ
ಬೆಚ್ಚನೆಯ ಸೆರಗಂಚು
ಬರಿ
ಜರತಾರಿ ಮತ್ತು
ಮೆಲ್ಲುವ ಎಲೆಯಡಿಕೆ ಗಂಟು
ತುದಿಯಲ್ಲಿ
ಅವಳು ಗೆಳತಿಗೆ ಹೇಳಿದ್ದು:
In ಪದ್ಯ on April 4, 2007 at 1:42 amಭೂಮಿಗಿಂತ ಹಳೆಯದಾದ ಕಡಲು ತೊಳೆವ ಮರಳಿನಲ್ಲಿ-
ಹಕ್ಕಿ-ಕೂಗು ತುಂಬಿಹೋದ ತೋಪಿನಲ್ಲಿ-
ಗೊಂಚಲಹೂ ಹೊನ್ನೆ ಮರದ ನೆರಳಿನಡಿಯ ದಂಡೆಯಲ್ಲಿ-
ನಾವು ಪ್ರೀತಿ ಮಾಡಿದಾಗ-
ಅವನೇ ನನ್ನ ಕಣ್ಣ ತುಂಬ
ಅವನೇ ನನ್ನ ಕಿವಿಯ ತುಂಬ
ಅಪ್ಪಿದಾಗ ಸುಂದರವದು ನನ್ನ ತೋಳು
ಬಿಡಿಸಿಕೊಳ್ಳುವಾಗ ಮಾತ್ರ ಸಣ್ಣಗಾಯಿತು.
ಹೇಗೆ ಇದನು ಬಗೆಯಲೆ?
-Venmanipputi, Kuruntokai 299
(ಎ.ಕೆ.ರಾಮಾನುಜಂರ ಇಂಗ್ಲೀಷ್ ಭಾಷಾಂತರದಿಂದ ಅನುವಾದಿಸಿಕೊಂಡದ್ದು)


